'ಬಿಚ್ಚುಗತ್ತಿ' ರಾಜವರ್ಧನ್ ಕಾಲಿವುಡ್ಗೆ ಎಂಟ್ರಿ
ಕನ್ನಡ, ತಮಿಳು ದ್ವಿಭಾಷಾ ಚಿತ್ರಕ್ಕೆ ರಾಜವರ್ಧನ್ ಗ್ರೀನ್ ಸಿಗ್ನಲ್ ಕೊಟ್ಟಿದ್ಧಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಬಿತ್ತುಗತ್ತಿ ಭರಮಣ್ಣ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಟ ರಾಜವರ್ಧನ್. ಬಿಚ್ಚುಗತ್ತಿ ಸೀಕ್ವೆಲ್ ಶೂಟಿಂಗ್ ನಡುವೆಯೇ ರಾಜವರ್ಧನ್ ಮತ್ತೊಂದು ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ಈ ಸಿನಿಮಾ ಮೂಲಕ ಕಾಲಿವುಡ್ಗೂ ಎಂಟ್ರಿ ಕೊಡುತ್ತಿದ್ದಾರೆ.
ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಬಿಚ್ಚುಗತ್ತಿ ಸಿನಿಮಾ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.. ದಳವಾಯಿ ದಂಗೆಯ ಮುಂದುವರೆದ ಭಾಗವನ್ನು ತೆರೆಮೇಲೆ ತರುವ ಪ್ರಯತ್ನ ನಡೀತಿದೆ. ಇದರ ಮಧ್ಯೆ ಮತ್ತೊಂದು ಚಿತ್ರಕ್ಕೆ ರಾಜವರ್ಧನ್ ಸಹಿ ಮಾಡಿದ್ದಾರೆ.
ಮೊದಲ ಸಿನಿಮಾದಲ್ಲೇ ಐತಿಹಾಸಿಕ ಪಾತ್ರ ಮಾಡಿ ಸೈ ಅನ್ನಿಸಿಕೊಂಡ ನಟ ರಾಜವರ್ಧನ್. ಹರಿ ಸಂತು ನಿರ್ದೇಶನದ ಬಿಚ್ಚುಗತ್ತಿ ಸಿನಿಮಾ ಒಂದು ರೇಂಜ್ಗೆ ಸದ್ದು ಮಾಡಿತ್ತು. ರಾಜವರ್ಧನ್ ಅಭಿನಯಕ್ಕೂ ಒಳ್ಳೆ ಮಾರ್ಕ್ಸ್ ಸಿಕ್ತು. ಇದೇ ಹುಮ್ಮಸ್ಸಿನಲ್ಲಿ ಕನ್ನಡ, ತಮಿಳು ದ್ವಿಭಾಷಾ ಚಿತ್ರಕ್ಕೆ ರಾಜವರ್ಧನ್ ಗ್ರೀನ್ ಸಿಗ್ನಲ್ ಕೊಟ್ಟಿದ್ಧಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಪ್ರೊಡಕ್ಷನ್ ನಂಬರ್ ವನ್ ಹೆಸರಿನಲ್ಲಿ ಪೋಸ್ಟರ್ ಸಮೇತ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ ರಾಜವರ್ಧನ್. ಈ ಪೋಸ್ಟರ್ ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಹುಟ್ಟಿಸುತ್ತಿದೆ. ಅಷ್ಟೇಅಲ್ಲ ಈ ಸಿನಿಮಾವನ್ನ ಏಕಕಾಲದಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಚಿತ್ರೀಕರಿಸಲಾಗುತ್ತದೆ. ಪ್ರೊಡಕ್ಷನ್ ನಂಬರ್ ವನ್ ಸಿನಿಮಾ ಸತ್ಯ ಘಟನೆಯಾಧಾರಿತ ಚಿತ್ರ ಅನ್ನೋದು ವಿಶೇಷ.
ರೆಡ್ ಡೈಮಂಡ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಸಿನಿಮಾವನ್ನ ಕುಮರೇಶ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಸದ್ಯಕ್ಕೆ ಸಿನಿಮಾ ಬಗ್ಗೆ ಇಷ್ಟೇ ಮಾಹಿತಿ ಸಿಕ್ಕಿರೋದು. ಸದ್ಯದಲ್ಲೇ ಚಿತ್ರದ ಫಸ್ಟ್ಲುಕ್ ಟೀಸರ್ ಲಾಂಚ್ ಮಾಡೋ ಪ್ಲಾನ್ನಲ್ಲಿದೆ ಚಿತ್ರತಂಡ. ಇನ್ನು ಈ ಚಿತ್ರದ ಟೆಕ್ನಿಕಲ್ ಟೀಂ ಮತ್ತು ಸ್ಟಾರ್ಕಾಸ್ಟ್ ದೊಡ್ಡ ಸರ್ಪೈಸ್ ಆಗಿರುತ್ತೆ ಅನ್ನಲಾಗುತ್ತಿದೆ. ಒಟ್ಟಾರೆಯಾಗಿ ರಾಜವರ್ಧನ್ ಎರಡನೇ ಸಿನಿಮಾದಲ್ಲೇ ಕಾಲಿವುಡ್ಗೆ ಎಂಟ್ರಿ ಕೊಡ್ತಿರೋದ ವಿಶೇಷ.