'ಒಂದು ಕೊಠಡಿಯಲ್ಲಿ 18 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ' - ಎಸ್ ಸುರೇಶ್ ಕುಮಾರ್

ಹಾಸನ: ಕೊರೊನಾ ವಾಸಿಯಾಗುವ ರೋಗ, ಆತಂಕ ಬೇಡ. ಸಾಮಾಜಿಕ ಅಂತರ ಸಾಮಾಜಿಕ ಎಚ್ಚರಿಕೆ ಆಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಶನಿವಾರ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇನ್ನೂ ಸ್ವಲ್ಪ ಸೋಂಕಿತರ ಸಂಖ್ಯೆ ಜಾಸ್ತಿ ಆಗಬಹುದು ಇದನ್ನು ಹೆದರಿಸಿ ಗುಣಪಡಿಸುವ ಶಕ್ತಿ ನಮಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದ್ರೆ ನಮ್ಮ ಕೆಲಸ ಶ್ಲಾಘನೀಯ ಎಂದು ಅವರು ನಮ್ಮ ದೇಶದಲ್ಲಿ ಕೊರೊನಾ ನಿರ್ವಹಣೆ ಬಗ್ಗೆ ಸಮರ್ಥಿಸಿಕೊಂಡರು.
ಇನ್ನು ಚಿಕ್ಕ ಮಕ್ಕಳಿಗೂ ಆನ್ಲೈನ್ ಟೀಚಿಂಗ್ ಬಗ್ಗೆ ಸಚಿವರ ಬೇಸರ ವ್ಯಕ್ತಪಡಿಸಿದ್ದು, ಶಾಲೆಗಳಲ್ಲಿ ಆನ್ಲೈನ್ ಟೀಚಿಂಗ್ ಗೀಳು ಬಂದಿದೆ. ಎಲ್ಕೆಜಿ, ಯುಕೆಜಿ ಮಕ್ಕಳಿಗೂ ಆನ್ಲೈನ್ ತರಗತಿ ಅರ್ಥವಾಗದ ಒಪ್ಪಲಾಗದ ವಿಚಾರವಾಗಿದ್ದು, ಎಳೆ ಮಕ್ಕಳಿಗೆ ಆನ್ಲೈನ್ ಪಾಠದಿಂದಾಗುವ ಪರಿಣಾಮದ ಬಗ್ಗೆ ವರದಿ ನೀಡುವಂತೆ ನಿಮಾನ್ಸ್ಗೆ ಪತ್ರ ಬರೆದಿದ್ದೇವೆ. ಅವರು ಈ ರೀತಿ ಹಿಂಸೆ ನೀಡಬಾರದು ಎಂದು ಹೇಳಿದ್ದಾರೆ ಎಂದರು.
ಸದ್ಯ ಅಧಿಕೃತ ವರದಿ ಬಂದ ಬಳಿಕ ಶಾಲೆಗಳಿಗೆ ಈ ಬಗ್ಗೆ ಸೂಚನೆ ನೀಡುತ್ತೇವೆ. ಸರ್ಕಾರದ ಸೂಚನೆ ಬರುವವರೆಗೂ ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಬಾರದು, ಸುತ್ತೋಲೆ ಹೊರಡಿಸದಂತೆ ಸೂಚನೆ ನೀಡಲಾಗಿದೆ. ಪ್ರವೇಶ ಶುಲ್ಕದಲ್ಲಿ ಯಾರೂ ಕೂಡ ಏರಿಕೆ ಮಾಡುವಂತಿಲ್ಲ, ಕೆಲವು ಶಾಲೆ ಹೆಚ್ಚಳ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅವರಿಗೆ ಶಿಕ್ಷಣ ಕಾಯ್ದೆಯಡಿ ನೋಟಿಸ್ ನೀಡಿದ್ದೇವೆ ಎಂದು ಅವರು ತಿಳಿಸಿದರು.
ಎಂಟೂವರೆ ಲಕ್ಷ ಎಸ್ಎಸ್ಎಲ್ಸಿ ಮಕ್ಕಳಿಗೂ ಮಾಸ್ಕ್ ನೀಡಲಾಗುವುದು. ಎಲ್ಲ ಪರೀಕ್ಷಾ ಸೆಂಟರ್ ಬಳಿ ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷೆಗೆ ಬರುವವರನ್ನು ಪರೀಕ್ಷೆ ಮಾಡಲಿದ್ದಾರೆ. ಪರೀಕ್ಷೆಗೆ ಮುಂಚೆ ಎಲ್ಲಾ ಕೊಠಡಿ ಸ್ಯಾನಿಟೈಸ್ಡ್ ಮಾಡುತ್ತೇವೆ. ಒಂದು ಕೊಠಡಿಯಲ್ಲಿ 18 ಜನ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ನುಡಿದರು..