ಆಪ್ತಮಿತ್ರನಿಗೆ ಗಣ್ಯರಿಂದ ಅಂತಿಮ ವಿದಾಯ

ಬದುಕಿನುದ್ದಕ್ಕೂ ಅಭಿಮಾನಿಗಳ ಪಾಲಿಗೆ ಅಚ್ಚುಮೆಚ್ಚಿನ ಅಣ್ಣನಾಗಿದ್ದ ಮಂಡ್ಯದ ಗಂಡು ಅಂಬರೀಶ್ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ಶಾಸ್ತ್ರೋಸ್ತವಾಗಿ ನೆರವೇರಿತು.ರಾಜ್ಯದ ಮೂಲೆಮೂಲೆಗಳಿಂದ ಹೊರರಾಜ್ಯಗಳಿಂದ ಅಂಬರೀಶ್ ಸ್ನೇಹಿತರು, ಅಭಿಮಾನಿಗಳು ಬಂದು ಅಂಬರೀಶ್ಗೆ ಅಂತಿಮ ನಮನ ಸಲ್ಲಿಸಿದರು.
ಇನ್ನು ಅಂಬರೀಶ್ ಪಾಲಿಗೆ ತಮ್ಮನಂತಿದ್ದ ಜಗ್ಗೇಶ್ ಅಂಬಿಯನ್ನು ನೆನೆದು ಭಾವುಕರಾದರು. ನಟ ದರ್ಶನ್ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಕಂಠೀರವ ಕ್ರೀಡಾಂಗಣದತ್ತ ಧಾವಿಸಿ ಬಂದರು. ನಟ ಯಶ್ ಕಾಲ್ನಡಿಗೆಯಲ್ಲೇ ನಡೆದು ವಾಹನಗಳನ್ನು ನಿಯಂತಿಸಿದರು. ಕಂಠೀರವ ಸ್ಟುಡಿಯೋ ತಲುಪಿದ ಅಂಬರೀಶ್ ಪಾರ್ಥಿವ ಶರೀರಕ್ಕೆ ಗಣ್ಯಾತಿ ಗಣ್ಯರು ಕೊನೆಯದಾಗಿ ನಮಿಸಿ ಗೌರವ ಸಲ್ಲಿಸಿದರು.
ರವಿಚಂದ್ರನ್, ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಯಶ್, ಜಗ್ಗೇಶ್, ದರ್ಶನ್, ಧ್ರುವಸರ್ಜಾ, ನಟಿ ರಾಗಿಣಿ, ಮಾಲಾ ಶ್ರೀ, ಸೇರಿದಂತೆ ಅನೇಕ ಕಲಾವಿದರು ಅಂಬರೀಶ್ಗೆ ಅಂತಿಮ ನಮನ ಸಲ್ಲಿಸಿದರು.
ರಾಜಕೀಯ ಗಣ್ಯರಾದ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್. ಡಿ. ದೇವೆಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಶ್ರೀಗಂಧ, ಕರ್ಪೂರಗಳನ್ನು ಅಂಬರೀಶ್ ಚಿತೆಗೆ ಸಮರ್ಪಿಸಿದರು.
ಇನ್ನು ಕೊನೆಯದಾಗಿ ನೆಚ್ಚಿನ ನಟನನ್ನು ಕೊನೇ ಕ್ಷಣದಲ್ಲಾದರು ಕಣ್ತುಂಬಿಕೊಳ್ಳಲು ಅಭಿಮಾನಿಗಳಿಗಾಗ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು.
ಅಂಬರೀಶ್ ಅಂತಿಮ ಸಂಸ್ಕಾರಕ್ಕೆಂದು ಆಗಮಿಸಿದ್ದ ಲಕ್ಷಾಂತರ ಅಭಿಮಾನಿಗಳು ಮಂಡ್ಯದ ಗಂಡಿಗೆ ಜೈಕಾರಗಳನ್ನು ಕೂಗಿ ತಮ್ಮ ವಿದಾಯವನ್ನು ಸಲ್ಲಿಸಿದರು. ಸಂಜೆ 6 ಗಂಟೆಗೆ ಪುತ್ರ ಅಭಿಷೇಕ್ ಅಂಬರೀಶ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಂಬಿಯ ಕೊನೇ ಕಾರ್ಯವನ್ನು ಮುಗಿಸಿದರು.
- actress Ragini and Mala Sri ambarish cm kumaraswamy darshan Dhruvarsaraja former cm siddaramaiah former prime minister H. D. Deve Gowda Jaggesh kannada news today karnataka news today latest karnataka news mandya Puneet Rajkumar ravichandran shivarajkumar topnews tv5 kannada tv5 kannada live tv5 kannada news tv5 live yash