ಮಾಜಿ ಸಿಎಂ ಬೆನ್ನು ಬಿಡದ ಹೂಬ್ಲೋಟ್ ವಾಚ್ ಪ್ರಕರಣ...!

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗಿಪ್ಟ್ ಪಡೆದಿದ್ದ ದುಬಾರಿ ಹೂಬ್ಲೋಟ್ ವಾಚ್ ಪ್ರಕರಣದ ತನಿಖೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಡಾ.ಗಿರೀಶ್ ಚಂದ್ರ ವರ್ಮಾ ನಕಲಿ ಬಿಲ್ ನೀಡಿದ್ದಾರೆ ಎಂದು ದೂರುದಾರ ನಟರಾಜ್ ಶರ್ಮಾ ಆರೋಪಿಸಿದ್ದಾರೆ.
ವಾಚ್ ಗಿಪ್ಟ್ ಪಡೆದಿದ್ದ ಹಿನ್ನಲೆಯಲ್ಲಿ ಸದನದಲ್ಲಿ ಪತ್ರಿಪಕ್ಷಗಳು ಉಭಯ ಸದನಗಳಲ್ಲಿ ಹೋರಾಟ ನಡೆಸಿ, ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮಗೆ ಒತ್ತಾಯಿಸಿದ್ರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ವಾಚ್ಅನ್ನು ವಿಧಾನಸೌಧದಲ್ಲೇ ಬಿಟ್ಟಿದ್ದರು.
ಆದ್ರೆ ಪ್ರತಿಪಕ್ಷಗಳ ಹೋರಾಟಕ್ಕೆ ಎಚ್ಚೆತ ಸಿದ್ದು ದುಬೈ ನಲ್ಲಿರುವ ವೈದ್ಯ ಸ್ನೇಹಿತ ಡಾ.ಗಿರೀಶ್ ಚಂದ್ರ ವರ್ಮಾ ಗಿಪ್ಟ್ ನೀಡಿದ್ದಾಗಿಯೂ. ಜತೆಗೆ ಸಂಬಂಧಿಸಿದ ದಾಖಲೆಗಳಿವೆ ಎಂದು ಬಿಲ್ಗಳನ್ನು ಸದನದಲ್ಲಿ ತೋರಿಸಿ ಪ್ರಕರಣಕ್ಕೆ ತಿಲಾಜಂಲಿ ಇಟ್ಟಿದ್ದರು. ಈಗ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕು, ವಾಚ್ ಖರೀದಿಸಿರುವುದು 2015ರ ಏಪ್ರಿಲ್ 12 ರಂದು. 2016 ರ ಏಪ್ರಿಲ್ನಲ್ಲಿ ಸಿದ್ದು ವಿರುದ್ಧ ಎಸಿಬಿಯಲ್ಲಿ ವಕೀಲ ನಟರಾಜ್ ಶರ್ಮಾ ದೂರು ನೀಡಿರುವುದು. ಆದ್ರೆ ಡಾ.ಗಿರೀಶ್ ಚಂದ್ರ ಕಸ್ಟಮ್ಸ್ ಡ್ಯೂಟಿ ಕಟ್ಟಿರುವುದು 2016 ಮೇ 2ರಂದು. ದೂರು ದಾಖಲಾದ ಒಂದು ತಿಂಗಳ ನಂತರ ಗಿರೀಶ್ ಚಂದ್ರ ವರ್ಮಾ ಕಸ್ಟಮ್ಸ್ ಡ್ಯೂಟಿ ಪಾವತಿಸಿದ್ದಾರೆ.
ಅಲ್ಲದೇ ಎಸಿಬಿಗೆ ನೀಡಿರುವ ಇನ್ ವಾಯ್ಸ್ ನಂಬರ್ ಬೇರೆ ಹೆಸರಿನಲ್ಲಿದೆ. ಅಲ್ದೆ ಬಿಲ್ ನ ಎಡಿಟ್ ಮಾಡಿ ಎಸಿಬಿಗೆ ನೀಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ರು. ಡಾ. ಗಿರೀಶ್ ಚಂದ್ರ ವರ್ಮಾ ನೀಡಿರುವ ದಾಖಲೆ ದುಬೈ ಖಥಾನ್ ಜ್ಯುವೆಲರಿಯಿಂದ ಬಿಲ್ ಅಸಲಿತನವನ್ನು ಎಸಿಬಿ ತನಿಖೆ ನಡೆಸಿಲ್ಲ. ಅಲ್ದೆ ಆರೋಪಿ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ಹಾಗೂ ಗಿಫ್ಟ್ ಕೊಟ್ಟಿರುವ ಡಾ.ಗಿರೀಶ್ ಚಂದ್ರ ಹೇಳಿಕೆಗಳನ್ನು ಎಸಿಬಿ ಪಡೆದಿಲ್ಲ. ಪ್ರಕರಣವನ್ನು ಹಳ್ಳ ಹಿಡಿಸುವ ಹುನ್ನಾರ ಎಸಿಬಿಯಿಂದ ನಡೆದಿದ್ಯಾ ಎಂಬ ಆರೋಪಗಳು ಬಂದಿವೆ.
ಈ ಮೂಲಕ ಕಳೆದ ಒಂದು ವರ್ಷದಿಂದ ತಣ್ಣಗಿದ್ದ ಕೇಸ್ಗೆ ಮರು ಜೀವ ಬಂದಿದೆ. ಸಮ್ಮಿಶ್ರ ಸರ್ಕಾರದಲ್ಲಿ ಪದೆ ಪದೆ ಸಿಎಂ ಎಚ್ಡಿಕೆ ಟಾಂಗ್ ನೀಡುತ್ತಿರುವ ಮಾಜಿ ಸಿಎಂ ಸಿದ್ದು ಕಟ್ಟಿಹಾಕಲು ಎಚ್ಡಿಕೆಗೆ ಇದೇ ಅಸ್ರ್ತವಾಗುತ್ತಾ ಅನ್ನೊದನ್ನ ಕಾದು ನೋಡಬೇಕಿದೆ.